ತಾವರೆ ಬೀಜಗಳ ಈ ಪ್ರಯೋಜನಗಳು ತಿಳಿದಿರಲಿ!

ಕಮಲದ ಹೂವು ಅಥವಾ ತಾವರೆ ಹೂವು ಸೌಂದರ್ಯ ಮತ್ತು ಸೊಬಗುಗಳಿಗೆ ಹೆಸರುವಾಸಿಯಾಗಿದೆ. ಇದನ್ನು ಭಾರತದ ರಾಷ್ಟ್ರೀಯ ಹೂವು ಎಂದು ಕರೆಯಲಾಗುತ್ತದೆ. ಇದು ಅಕ್ವೇರಿಯಂ ಸಸ್ಯ. ಇದನ್ನು ದೇವರಿಗೆ ತುಂಬಾ ವಿಶೇಷವೆಂದು ಕೂಡ ಪರಿಗಣಿಸಲಾಗಿದೆ. ಇದಲ್ಲದೆ, ಈ ಹೂವಿನ ಬಗ್ಗೆ ಗೊತ್ತಿಲ್ಲದ ಹಲವಾರು ಪ್ರಯೋಜನಗಳಿವೆ. ಕಮಲದ ಹೂವಿನ ಬೀಜಗಳು ಚರ್ಮ, ಕೂದಲು ಮತ್ತು ಆರೋಗ್ಯಕ್ಕೆ ಹೇರಳವಾದ ಪ್ರಯೋಜನಗಳನ್ನು ನೀಡುತ್ತದೆ. ಪೌಷ್ಠಿಕಾಂಶ ಹೊಂದಿರುವ ಅನೇಕ ಬಗೆಯ ಹಣ್ಣುಗಳು ಮತ್ತು ತರಕಾರಿಗಳನ್ನು ನಾವು ನೋಡಿದ್ದೇವೆ. ಆದರೆ ಬಹಳಷ್ಟು ಪೋಷಕಾಂಶಗಳಿಂದ ತುಂಬಿದ ಲೋಟಸ್ (ತಾವರೆ/ಕಮಲದ) ಹೂವಿನ ಬೀಜವು ಎಲ್ಲರನ್ನು ಆಶ್ಚರ್ಯಗೊಳಿಸುತ್ತದೆ. ಕಮಲದ ಬೀಜಗಳ ಪ್ರಯೋಜನಗಳನ್ನು ಇಲ್ಲಿ ವಿವರಿಸಿದ್ದೇವೆ.
#ಉತ್ತಮ ಅರಿವಿನ ಕಾರ್ಯ: ಕಮಲದ ಬೀಜಗಳಲ್ಲಿ ಉತ್ತಮ ಪ್ರಮಾಣದ ಥಯಾಮಿನ್ ಅಥವಾ ವಿಟಮಿನ್ ಬಿ 1 ಇರುತ್ತದೆ. ಆಹಾರದಿಂದ ಕಾರ್ಬೋಹೈಡ್ರೇಟ್ಗಳನ್ನು ದೇಹಕ್ಕೆ ಅಗತ್ಯವಿರುವ ಉತ್ಪನ್ನಗಳಾಗಿ ಒಡೆಯಲು ಥಯಾಮಿನ್ ಸಹಾಯ ಮಾಡುತ್ತದೆ. ಥಯಾಮಿನ್ ಕೊರತೆಯು ಅರಿವಿನ ಕೊರತೆ ಮತ್ತು ಎನ್ಸೆಫಲೋಪತಿ ಸೇರಿದಂತೆ ನರವೈಜ್ಞಾನಿಕ ಸಮಸ್ಯೆಗೆ ಸಂಬಂಧಿಸಿದೆ.
#ಜೀರ್ಣಕ್ರಿಯೆ ಸುಧಾರಿಸುತ್ತದೆ: ಕಮಲದ ಬೀಜಗಳ ಸೇವನೆಯು ನಿಯಮಿತವಾಗಿ ಕರುಳಿನ ಚಲನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಮತ್ತು ಅಜೀರ್ಣ ಮತ್ತು ಮಲಬದ್ಧತೆಯನ್ನು ತಡೆಯುತ್ತದೆ.
#ನಿದ್ರಾಹೀನತೆಯನ್ನು ಪರಿಹರಿಸುತ್ತದೆ – ನಿದ್ರಾಹೀನತೆಯು ಬದಲಾಗುತ್ತಿರುವ ಜೀವನಶೈಲಿಯೊಂದಿಗೆ ಹೆಚ್ಚಿನ ಜನರಲ್ಲಿ ಕಂಡುಬರುತ್ತದೆ. ಕಮಲದ ಬೀಜಗಳು ಶಾಂತಗೊಳಿಸುವ ಮತ್ತು ನೈಸರ್ಗಿಕ ನಿದ್ರಾಜನಕ ಶಕ್ತಿಯನ್ನು ಹೊಂದಿದ್ದು, ಇದು ನಿದ್ರಾಹೀನತೆ, ಚಡಪಡಿಕೆ ಮತ್ತು ಸೋಮಾರಿತನದಿಂದ ಜನರನ್ನು ಗುಣಪಡಿಸುತ್ತದೆ.
#ಮಧುಮೇಹಿಗಳಿಗೆ ಒಳ್ಳೆಯದು:ಮಖಾನಾ ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ಗಳಲ್ಲಿ ಸಮೃದ್ಧವಾಗಿದೆ. ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಅಧಿಕ ತೂಕ ಮತ್ತು ಮಧುಮೇಹದ ವಿರುದ್ಧ ಹೋರಾಡುವ ಸಾಮರ್ಥ್ಯ ತಾವರೆ ಬೀಜಗಳಿಗೆ ಇದೆ.