ಕೂದಲು ಉದುರುವಿಕೆಗೆ ಕೆಲವು ಮನೆಮದ್ದು!

ತಪ್ಪಾದ ಕೇಶವಿನ್ಯಾಸ:ಇದು ವಿಚಿತ್ರವೆನಿಸಬಹುದು ಆದರೆ ಕೂದಲು ಉದುರುವಿಕೆಯಲ್ಲಿ ನಿಮ್ಮ ಕೇಶವಿನ್ಯಾಸವು ದೊಡ್ಡ ಪಾತ್ರವನ್ನು ವಹಿಸುತ್ತದೆ. ನೀವು ಹೆಚ್ಚಾಗಿ ಪೋನಿಟೇಲ್ ಅಥವಾ ತುರುಬುಗಳನ್ನು ಆರಿಸಿಕೊಂಡರೆ, ಬಹುಶಃ ಕೂದಲು ಉದುರುವಿಕೆಗೆ ಕಾರಣವಾಗಬಹುದು. ಇಂತಹ ಸಮಸ್ಯೆಗಳಿಗೆ ಮನೆಮದ್ದು ತಿಳಿದುಕೊಳ್ಳಿ ಈಗ!
#ನಿಂಬೆ ರಸವನ್ನು ಅನ್ವಯಿಸಿ:ಕೂದಲು ಉದುರುವಿಕೆಗೆ ನಿಂಬೆ ರಸವನ್ನು ನೇರವಾಗಿ ಕೂದಲಿಗೆ ಹಚ್ಚುವ ಅಗತ್ಯವಿಲ್ಲ. ಇದಕ್ಕಾಗಿ ನೀವು ತೆಂಗಿನ ಎಣ್ಣೆಯನ್ನು ಬಳಸಬೇಕಾಗುತ್ತದೆ. ಎರಡೂ ಪದಾರ್ಥಗಳನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಂಡು ನೆತ್ತಿಗೆ ಚೆನ್ನಾಗಿ ಮಸಾಜ್ ಮಾಡಿ. ಒಂದು ಗಂಟೆಯ ನಂತರ ಕೂದಲನ್ನು ಶಾಂಪೂ ಬಳಸಿ ತೊಳೆಯಿರಿ.ತುರಿಕೆ, ತಲೆಹೊಟ್ಟು, ಹೆಚ್ಚುವರಿ ಎಣ್ಣೆ ಮತ್ತು ಕೂದಲು ಉದುರುವಿಕೆ ಇತ್ಯಾದಿ ಸಮಸ್ಯೆಗಳನ್ನು ಇದರಿಂದ ನಿವಾರಿಸಬಹುದು.
#ವೀಳ್ಯದೆಲೆ:ವೀಳ್ಯದೆಲೆಯನ್ನು ನುಣ್ಣಗೆ ಅರೆದು, ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ತಲೆಗೆ ಹಚ್ಚಿಕೊಂಡು ಸ್ನಾನ ಮಾಡಿದರೆ, ಕೂದಲು ಉದುರುವುದು, ಹೊಟ್ಟು ಕಡಿಮೆಯಾಗುತ್ತದೆ.
#ಬೇವಿನ ಬಳಕೆ: ಕೂದಲು ಉದುರುವುದು ಹಾಗೂ ತಲೆಹೊಟ್ಟಿನ ಸಮಸ್ಯೆಗೆ ಬೇವು ಅತ್ಯಂತ ಉತ್ತಮ ಆಯುರ್ವೇದ ಔಷಧಿ. ಇದನ್ನು ಕೂದಲ ಬುಡಕ್ಕೆ ಹಚ್ಚುವುದರಿಂದ ರಕ್ತಸಂಚಲನ ಹೆಚ್ಚುತ್ತದೆ. ಅಷ್ಟೇ ಅಲ್ಲದೆ ಬಾಲನೆರೆ, ಕೂದಲು ಉದುರಿ ತೆಳ್ಳಗಾಗುವುದನ್ನು ಇದು ತಪ್ಪಿಸುತ್ತದೆ. ನೀರಿನಲ್ಲಿ ಬೇವಿನ ಎಲೆ ಹಾಕಿ ಚೆನ್ನಾಗಿ ಕುದಿಸಿ ಅದರ ನೀರನ್ನು ಕೂದಲ ಬುಡಕ್ಕೆ ಹಚ್ಚಿ ಒಣಗಿದ ಮೇಲೆ ಸ್ನಾನ ಮಾಡುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ. ಅಲ್ಲದೇ ಕೂದಲ ಬೆಳವಣಿಗೆಯೂ ಹೆಚ್ಚುತ್ತದೆ.
#ರೋಸ್ಮರಿ ಎಣ್ಣೆ: ರೋಸ್ಮರಿ ಎಣ್ಣೆಯು ಅಂಟಿ ಇನ್ಫ್ಲಾಮೇಟರಿ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ರಕ್ತಪರಿಚಲನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಆದ್ದರಿಂದ ಕೂದಲು ಉದುರುವಿಕೆಗೆ ಚಿಕಿತ್ಸೆ ನೀಡಲು ಇದು ನೈಸರ್ಗಿಕ ಆಯ್ಕೆಯಾಗಿದೆ. ನೀವು ಮಾಡಬೇಕಾಗಿರುವುದು ನಿಮ್ಮ ಅಂಗೈಯಲ್ಲಿ ಕೆಲವು ಹನಿ ರೋಸ್ಮರಿ ಎಣ್ಣೆಯನ್ನು ತೆಗೆದುಕೊಂಡು ಅದನ್ನು ಪ್ರತಿ ರಾತ್ರಿ ತಲೆಗೆ ಹಚ್ಚಿ ಮಸಾಜ್ ಮಾಡಿ. ಜೊತೆಗೆ ರೋಸ್ಮರಿ ಎಣ್ಣೆಯನ್ನು ಹೊಂದಿರುವ ನೈಸರ್ಗಿಕ ಶಾಂಪೂ ಬಳಸಿ.
#ಕೂದಲಿನ ಬೆಲೆ ಕೂದಲನ್ನು ಕಳೆದುಕೊಂಡವರಿಗೆ ಮಾತ್ರ ಗೊತ್ತಾಗುತ್ತದೆ. ಕೂದಲನ್ನು ಕಳೆದುಕೊಳ್ಳುವ ಮುನ್ನ ಪ್ರತಿ ನಿತ್ಯ 7 ರಿಂದ 8 ತಾಸು ನಿಶ್ಚಿಂತೆಯಿಂದ ನಿದ್ರಿಸಿದರೆ ಕೂದಲು ಉದುರುವುದನ್ನು ತಡೆಯಬಹುದು. ಹಾಗೂ ಸದಾ ಚಿಂತಿಸುವುದನ್ನು ಬಿಟ್ಟು ನೆಮ್ಮದಿಯಾಗಿರಬೇಕು. ತರಕಾರಿ ಮತ್ತು ಹಣ್ಣು ಹಂಪಲುಗಳನ್ನು ಸಮತೋಲನವಾಗಿ ಸೇವಿಸಬೇಕು.