ಈರುಳ್ಳಿ ಸಿಪ್ಪೆಗಳನ್ನೂ ಈ ರೀತಿ ಉಪಯೋಗಿಸಿ ನೋಡಿ..!

ಈರುಳ್ಳಿ ಸಿಪ್ಪೆಗಳನ್ನು ಒಣಗಿಸಿ ಸಂಗ್ರಹಿಸಿಟ್ಟು ಅಡುಗೆಯಲ್ಲಿ ಬಳಸಬಹುದು. ಅವು ಆರೋಗ್ಯಕ್ಕೂ ತುಂಬಾ ಒಳ್ಳೆಯದು.ಅಡುಗೆಗೆ ಬಳಸಿದ ಈರುಳ್ಳಿಯ ಸಿಪ್ಪೆಯನ್ನು ಎಲ್ಲರೂ ಎಸೆಯುತ್ತಾರೆ. ಅದರಿಂದ ಯಾವುದೇ ಉಪಯೋಗ ಇಲ್ಲ ಎಂದು ತಿಪ್ಪೆಗೆ ಸುರಿಯುತ್ತಾರೆ. ಆದರೆ ಕೆಲವು ಜನರಿಗೆ ಮಾತ್ರ ಈರುಳ್ಳಿ ಸಿಪ್ಪೆಯನ್ನು ಕೂಡಾ ಉಪಯೋಗಿಸಬಹುದು ಎಂಬ ಬಗ್ಗೆ ತಿಳಿದಿರುತ್ತದೆ. ಅವುಗಳಿಂದಾಗುವ ಪ್ರಯೋಜನಗಳನ್ನು ತಿಳಿದರೆ ನೀವು ಕೂಡಾ ನಾಳೆಯಿಂದ ಈರುಳ್ಳಿ ಸಿಪ್ಪೆಯನ್ನು ಬಳಸಲು ಆರಂಭಿಸುತ್ತೀರಿ

#ನೀರಿನಲ್ಲಿ ಮಿಶ್ರಣ ಮಾಡಿ:ಈರುಳ್ಳಿ ಸಿಪ್ಪೆ ಅಥವಾ ಅದರ ಪುಡಿಯನ್ನು ನೀರಿನಲ್ಲಿ ಬೆರೆಸಿ ಸ್ವಲ್ಪ ಹೊತ್ತು ನೆನೆಸಿದ ಬಳಿಕ ಕುಡಿಯಿರಿ. ಹೀಗೆ ಮಾಡುವುದರಿಂದ ಸ್ನಾಯು ಸೆಳೆತ ಕಡಿಮೆಯಾಗುತ್ತದೆ. ಸ್ನಾಯುಗಳು ಹೊಂದಿಕೊಳ್ಳುತ್ತವೆ. ಈರುಳ್ಳಿ ಸಿಪ್ಪೆಯನ್ನು ಒಂದು ಲೋಟ ನೀರಿನಲ್ಲಿ ಕಾಲು ಗಂಟೆ ನೆನೆಸಿಟ್ಟರೆ ಸಾಕು. ಬಳಿಕ ಸಿಪ್ಪೆ ತೆಗೆದು ಕುಡಿಯಿರಿ. ಇದು ಒಂದು ರೀತಿಯ ಔಷಧ.

#ಕೂದಲಿನ ಬೆಳವಣಿಗೆ:ಹೆಚ್ಚಿನ ಜನರಿಗೆ ಉದ್ದವಾದ ತಲೆಕೂದಲು ಹೊಂದಿರಬೇಕು ಎಂಬ ಆಸೆಯಿರುತ್ತದೆ. ಹೀಗಿರುವಾಗ ಈರುಳ್ಳಿ ಸಿಪ್ಪೆಯನ್ನು ನೀರಿನಲ್ಲಿ ಕುದಿಸಿ ಆ ನೀರನ್ನು ತಲೆಗೆ ಹಚ್ಚಿಕೊಳ್ಳುವ ಮೂಲಕ ದಟ್ಟವಾದ ಕೂದಲು ಪಡೆಯಬಹುದು. ಅದಲ್ಲದೆ ತಲೆಹೊಟ್ಟು ನಿವಾರಣೆ ಆಗುವುದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ. ಹಾಗೂ ನೈಸರ್ಗಿಕ ಕಪ್ಪು ಕೂದಲು ಪಡೆಯಲು ಸಹಾಯವಾಗುತ್ತದೆ.

#ಕಾಲು ನೋವಿಗೆ ಪರಿಹಾರ: ಕಾಲು ನೋವು ಮತ್ತು ಸ್ನಾಯು ಸೆಳೆತದಿಂದ ನೀವು ತೊಂದರೆಗೊಳಗಾಗಿದ್ದರೆ, ಈ ಸಮಸ್ಯೆಯನ್ನು ಹೋಗಲಾಡಿಸಲು, ನೀವು ಈರುಳ್ಳಿ ಸಿಪ್ಪೆಯಿಂದ ತಯಾರಿಸಿದ ಚಹಾವನ್ನು ಸೇವಿಸಬಹುದು. ಇದಕ್ಕಾಗಿ, ಈರುಳ್ಳಿ ಸಿಪ್ಪೆಯನ್ನು 1 ಗ್ಲಾಸ್ ನೀರಿನಲ್ಲಿ ಹಾಕಿ 15 ನಿಮಿಷಗಳ ಕಾಲ ಕುದಿಸಿ, ನಂತರ ನೀರನ್ನು ಫಿಲ್ಟರ್ ಮಾಡಿ. ನೀವು ಬಯಸಿದರೆ, ಈರುಳ್ಳಿ ಸಿಪ್ಪೆಯಿಂದ ತಯಾರಿಸಿದ ಚಹಾದ ರುಚಿಯನ್ನು ಹೆಚ್ಚಿಸಲು ನೀವು ಸ್ವಲ್ಪ ಜೇನುತುಪ್ಪವನ್ನು ಕೂಡ ಸೇರಿಸಬಹುದು. ಪ್ರತಿದಿನ ರಾತ್ರಿ ಮಲಗುವ ಮುನ್ನ ಈರುಳ್ಳಿ ಸಿಪ್ಪೆಯಿಂದ ತಯಾರಿಸಿದ ಚಹಾವನ್ನು ಸೇವಿಸುವುದರಿಂದ ಕಾಲುಗಳಲ್ಲಿನ ನೋವು ಮತ್ತು ಸ್ನಾಯು ಸೆಳೆತದ ಸಮಸ್ಯೆಯಿಂದ ಪರಿಹಾರ ಸಿಗುತ್ತದೆ.

#ಗಂಟಲು ನೋವು ಗುಣಪಡಿಸುವುದು:ಶೀತ ಮತ್ತು ಗಂಟಲು ನೋವು ತೊಡೆದುಹಾಕಲು, ಈರುಳ್ಳಿ ಸಿಪ್ಪೆಯನ್ನು ನೀರಿನಲ್ಲಿ ಕುದಿಸಿ ಮತ್ತು ಗಾರ್ಗ್ಲ್ ಮಾಡಿ. ಇದಲ್ಲದೆ, ನೀವು ಬಯಸಿದರೆ, ಈರುಳ್ಳಿ ಸಿಪ್ಪೆಗಳನ್ನು ಬೆರೆಸಿ ಚಹಾವನ್ನು ಸಹ ತಯಾರಿಸಬಹುದು. ಇದು ಗಂಟಲು ನೋವನ್ನು ತ್ವರಿತವಾಗಿ ಗುಣಪಡಿಸುತ್ತದೆ.

#ನೋವು ನಿವಾರಣೆಗೆ ಈರುಳ್ಳಿ ಟೀ:ನೀವು ಸ್ನಾಯು ಸೆಳೆತ ಅಥವಾ ನೋವು ಅಥವಾ ದೇಹದ ನೋವನ್ನು ಎದುರಿಸುತ್ತಿದ್ದರೆ, ಈರುಳ್ಳಿ ಸಿಪ್ಪೆಯ ಚಹಾವನ್ನು ಕುಡಿಯುವುದರಿಂದ ನಿಮ್ಮ ನೋವು ಗುಣವಾಗಲು ಸಹಾಯ ಆಗುವುದು. ನೀರಿನಲ್ಲಿ ಕೆಲವು ಈರುಳ್ಳಿ ಸಿಪ್ಪೆಗಳನ್ನು ಕುದಿಸಿ, ಸೋಸಿ. ಮಲಗುವ ಮುನ್ನ ಈ ಚಹಾವನ್ನು ಕುಡಿಯಿರಿ, ಇದು ಸ್ನಾಯುಗಳ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ.

#ತ್ವಚೆಯ ಸಮಸ್ಯೆಗಳಿಗೂ ಈರುಳ್ಳಿ ಸಿಪ್ಪೆ ಪರಿಹಾರ ನೀಡುತ್ತದೆ. ಈರುಳ್ಳಿ ಸಿಪ್ಪೆಯು ಶಿಲೀಂಧ್ರನಾಶಕ ಗುಣಗಳನ್ನು ಹೊಂದಿದೆ. ತುರಿಕೆಯಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ಈರುಳ್ಳಿ ಸಿಪ್ಪೆಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ. ನೀರು ತಣ್ಣಗಾದ ನಂತರ ಅದನ್ನು ಗಾಜಿನ ಬಾಟಲಿಯಲ್ಲಿ ಶೇಖರಿಸಿಡಬೇಕು. ಹತ್ತಿಯ ಉಂಡೆಯನ್ನು ನೀರಿನಲ್ಲಿ ಅದ್ದಿ ಅದನ್ನು ನೋವಿರುವ ಜಾಗಕ್ಕೆ ಹಚ್ಚಿದರೆ ತುರಿಕೆ ಕಡಿಮೆಯಾಗುತ್ತದೆ.ಹಚ್ಚಿದರೆ ತುರಿಕೆ ಕಡಿಮೆಯಾಗುತ್ತದೆ

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group