ನೀರಿದ್ದರೆ ಮಾತ್ರವೇ ನಮ್ಮೆಲ್ಲರ ಉಳಿವು..!

#ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಕೈಗಾರಿಕೆಗಳ ತ್ಯಾಜ್ಯ ಹಾಗೂ ವಿಷಯುಕ್ತ ರಾಸಾಯನಿಕ ಪದಾರ್ಥಗಳು ನೀರಿನ ಮೂಲಗಳಿಗೆ ಸೇರದಂತೆ ಕಠಿಣ ಕಾನೂನು ರೂಪಿಸಿ ಜಾರಿಗೆ ಬರುವಂತೆ ಮಾಡುವುದು.
#ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಪ್ರತೀ ಮನೆಗಳಲ್ಲಿ ಹಾಗೂ ನೂತನವಾಗಿ ನಿರ್ಮಾಣವಾಗುತ್ತಿರುವ ಕಟ್ಟಡಗಳಲ್ಲಿ ಖಡಾಖಂಡಿತವಾಗಿ ಮಳೆ ಕೊಯ್ಲು ಪದ್ಧತಿಯನ್ನು ತುರ್ತಾಗಿ ಅಳವಡಿಸಿ ಕೊಳ್ಳುವಂತೆ ಅಗತ್ಯ ಅರಿವು ಮೂಡಿಸು ವುದು, ಆದೇಶ ಜಾರಿಗೆ ತರುವುದು.
#ನೀರನ್ನು ಮಲಿನ ಮಾಡುವ ಹಾಗೂ ನೀರಿಗೆ ವಿಷಯುಕ್ತ ಪದಾರ್ಥಗಳನ್ನು ಬೆರೆಸುವುವರ ವಿರುದ್ಧ ತಪ್ಪಿಸಿಕೊಳ್ಳಲು ಸಾಧ್ಯವೇ ಆಗದಂತೆ ಕಠಿಣ ಕಾನೂನು ಕ್ರಮ ಜರುಗಿಸುವುದು. ಪರಿಸರ ಸ್ನೇಹಿ ಕಟ್ಟಡಗಳನ್ನು ನಿರ್ಮಿಸುವತ್ತ ಆಸಕ್ತಿ ತೋರುವುದು.
#ಭೂಮಾಲಿನ್ಯ, ವಾಯುಮಾಲಿನ್ಯ ತಡೆಗೆ ವಾಹನಗಳಲ್ಲಿ ಹಾಗೂ ಕೈಗಾರಿಕೆಗಳಲ್ಲಿ ತಂತ್ರಜಾ್ಞನ ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುವುದು.
#ಮನೆಗಳಲ್ಲಿ ವಿವಿಧ ಕೆಲಸ-ಕಾರ್ಯಗಳಿಗೆ ಅಗತ್ಯವಿರುವ ಕನಿಷ್ಟ ನೀರಿನ ಬಳಕೆ ಹಾಗೂ ನೀರಿನ ಮರುಪೂರಣ ವ್ಯವಸ್ಥೆ ಬಗ್ಗೆ ಜಾಹೀರಾತುಗಳು ಮತ್ತು ಅರಿವು ಮೂಡಿಸುವ ಕಾರ್ಯಕ್ರಮಗಳ ಮೂಲಕ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವುದು.
#ಕೊಳಾಯಿಗಳಲ್ಲಿ ಹಾಗೂ ಸರಬರಾಜು ವ್ಯವಸ್ಥೆಯಲ್ಲಿ ನೀರಿನ ಅನಗತ್ಯ ಪೋಲನ್ನು ತಡೆಯುವಲ್ಲಿ ತುರ್ತು ಗಮನ ಹರಿಸುವುದು.
#ಮಳೆಗಾಲದಲ್ಲಿ ಹರಿಯುವ ನೀರನ್ನು ಓಡುವಂತೆ, ಓಡುವ ನೀರನ್ನು ತೆವಳುವಂತೆ, ತೆವಳುವ ನೀರನ್ನು ನಿಲ್ಲುವಂತೆ ಮಾಡುವುದು. ಇದರಿಂದ ಅಂತರ್ಜಲದ ಮಟ್ಟ ಅಧಿಕವಾಗಿ ವರ್ಷ ಪೂರ್ತಿ ಜೀವಜಲ ಸಮೃದ್ಧವಾಗಿ ದೊರಕುವುದರಲ್ಲಿ ಸಂಶಯವಿಲ್ಲ.